ಪಂಪ: ಕವಿ ಮತ್ತು ಕೃತಿಯ ಪರಿಚಯ

 

ಜನನ:
ಕ್ರಿ.ಶ. 902, ದುಂದುಭಿ ಸಂವತ್ಸರ.

ತಂದೆ:
ಭೀಮಪ್ಪಯ್ಯ.

ತಾಯಿ:
ಅಬ್ಬಣಬ್ಬೆ (ಬೆಳ್ವೊಲದ ಅಣ್ಣಿಗೇರೆಯ ಜೋಯಿಸ ಸಿಂಘನ ಮೊಮ್ಮಗಳು).

ಜನ್ಮಸ್ಥಳ:
ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ ಪ್ರದೇಶ), ವೇಮಲವಾಡ, ರಾಜಮಂಡ್ರಿ ಜಿಲ್ಲೆ (ಅಗ್ರಹಾರವೆನಿಸಿದ 'ವೆಂಗಿಪಳು').

ಗುರು:
ದೇವೇಂದ್ರಮುನಿ.

ವಿದ್ಯಾಭ್ಯಾಸ:
ಪಂಪನು ಗಣಿತ, ವ್ಯಾಕರಣ, ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯಶಾಸ್ತ್ರ, ವೇದ ಶాస్త್ರ ಇತ್ಯಾದಿಗಳನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದ. ಈತನ ಗುರು ದೇವೇಂದ್ರ ಮುನೀಂದ್ರರು.

ವೃತ್ತಿ:
ವೆಂಗಿ ಚಾಲುಕ್ಯವಂಶದ ಎರಡನೇ ಅರಿಕೇಸರಿಯ ಆಸ್ಥಾನ ಪಂಡಿತನಾಗಿ ಸೇವೆ ಸಲ್ಲಿಸಿದ್ದ.

ಸಾಹಿತ್ಯಕೃತಿಗಳು:

  1. ಆದಿಪುರಾಣ:
    ಮೊದಲನೆಯ ತೀರ್ಥಂಕರನಾದ ವೃಷಭದೇವನ ಬಗ್ಗೆ ಬರೆದ ಜೈನಕಾವ್ಯ. ಇದನ್ನು ಜಿನಸೇನಾಚಾರ್ಯರ ಪೂರ್ವಪುರಾಣದ ಆಧಾರದ ಮೇಲೆ ರಚಿಸಲಾಗಿದೆ. ಕೃತಿಯಲ್ಲಿಯು 16 ಆಶ್ವಾಸಗಳು ಮತ್ತು 1555 ಪದ್ಯಗಳಿವೆ, ಮತ್ತು ಜೈನ ಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಗಮನಾರ್ಹವಾಗಿ ಮೆರೆದಿದ್ದಾರೆ.

  2. ವಿಕ್ರಮಾರ್ಜುನ ವಿಜಯ (ಪಂಪಭಾರತ):
    ಮಹಾಭಾರತದ ಕನ್ನಡ ಅನುವಾದವಾಗಿರುವ ಈ ಕೃತಿಯಲ್ಲಿ, ಪಂಪನು ವ್ಯಾಸರಿಂದ ರಚಿತವಾದ ಮಹಾಭಾರತವನ್ನು ಕನ್ನಡ ಭಾಷೆಗೆ ತಂದ ಶ್ರೇಯಸ್ಸು ಪಡೆದಿದ್ದಾನೆ. ಕೃತಿಯಲ್ಲಿ ಅರ್ಜುನನ ಪ್ರಧಾನ ಪಾತ್ರವನ್ನು ಅರಿಕೇಸರಿಯೊಂದಿಗೆ ಹೋಲಿಸಿದ್ದಾನೆ. ಈ ಕಾವ್ಯದಲ್ಲಿ ಪಂಪ ತನ್ನ ಕಾಲದ ಸಮಾಜ, ಸಂಸ್ಕೃತಿ, ಆಟಗಳು, ವಿದ್ಯಾಭ್ಯಾಸ ಪದ್ಧತಿ, ಮತ್ತು ಜನರ ವಿಲಾಸಿ ಜೀವನವನ್ನು ಸಮಗ್ರವಾಗಿ ಚಿತ್ರಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ ಮತ್ತು ಬಿರುದುಗಳು:
ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ ಮುಂತಾದ ಬಿರುದುಗಳನ್ನು ಪಂಪ ಪಡೆದಿದ್ದಾನೆ. ಪಂಪನ ಕಾವ್ಯ ಶ್ರೇಷ್ಠತೆಯನ್ನು ಹೊಗಳಿ, ಕವಿ ನಾಗರಾಜನು "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದಿದ್ದಾರೆ.

ಕವಿ ಸಂದೇಶ:
'ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆ ರಸಮದುಕಾಮಂ' ಎಂದು ಪಂಪನು ತನ್ನ ಜೀವನದ ದೃಷ್ಟಿಕೋನವನ್ನು ವಿವರಿಸಿದ್ದಾನೆ.

ಕನ್ನಡನಾಡಿನ ಮೇಲೆ ಹೆಮ್ಮೆ:
ಪಂಪನು ಕನ್ನಡನಾಡಿನ ಸೌಂದರ್ಯವನ್ನು ತನ್ನ ಕಾವ್ಯಗಳಲ್ಲಿ ಹೊಗಳುತ್ತಾ, ಬನವಾಸಿ ದೇಶದ ಸೊಬಗನ್ನು ಈ ರೀತಿ ವರ್ಣಿಸಿದ್ದಾರೆ:

"ಸೊಗಸಾಗಿ ಬಂದ ಮಾಮರನೆ ತಲ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನನಂಗಳೊಳಂ ಬನವಾಸಿ ದೇಶದೊಳ್|| ೪-೨೮||"

"ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||"

"ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||"

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now