ಜೀವಪರಿಸರ ಶಾಸ್ತ್ರ (Ecology) : ಜೀವಪರಿಸರ ಶಾಸ್ತ್ರವು ಜೀವಿಗಳು ಮತ್ತು ಅವುಗಳ ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸರಗಳ ನಡುವಿನ ಸಂಬಂಧವನ್ನು
ವಿವರಿಸುವ ವಿಜ್ಞಾನವಾಗಿದೆ. ಜೀವಿಗಳು ಮತ್ತು ಪ್ರಾಕೃತಿಕ ಪರಿಸರ ಹಾಗೂ ವಿವಿಧ ಪ್ರಕಾರದ ಪ್ರಾಣಿಗಳ ನಡುವೆ ಸೌಹಾರ್ದಯುತವಾದ ಹಾಗೂ ಸಮತೋಲನವಾದ ಸಂಬಂಧ ನೈಸರ್ಗಿಕವಾಗಿ ಕಂಡುಬರುವುದು. ಇದನ್ನೇ ಜೈವಿಕ ಪರಿಸರ ಸಮತೋಲನ ಎನ್ನುವರು.
ಪ್ರಾಣಿವರ್ಗ ಮತ್ತು ಸಸ್ಯವರ್ಗಗಳು ತಮ್ಮ ಸುತ್ತಲಿನ ಸಜೀವ ಹಾಗೂ ನಿರ್ಜೀವ ಭಾಗಗಳ ನಡುವಿನ ಪರಸ್ಪರ ಸಂಬಂಧವನ್ನು ಜೀವಿಪರಿಸರವ್ಯವಸ್ಥೆ' ಎನ್ನುವರು. ಅಂದರೆ ಜೀವ ಪರಿಸ್ಥಿತಿಯ ಸಮಸ್ತ ಘಟಕಗಳೂ ಸೇರಿ ಹೊಂದಾಣಿಕೆಯಿಂದಿರುವುದನ್ನು ವಿವರಿಸುತ್ತದೆ.
ಜೀವಗೋಳದಲ್ಲಿ ಜೀವಿಪರಿಸರ ವ್ಯವಸ್ಥೆ ಅಥವಾ ಜೀವಿಪರಿಸರ ಸಮತೋಲನವಿಲ್ಲದಿದ್ದರೆ ಸಸ್ಯಗಳು, ಪ್ರಾಣಿಗಳು ಮತ್ತು ಅತಿ ಸೂಕ್ಷ್ಮಜೀವಿಗಳ ಸಮೂಹಗಳ ಅಸ್ತಿತ್ವವನ್ನು ಕಲ್ಪಿಸಲು ಅಸಾಧ್ಯ. ಪ್ರತಿಯೊಂದು ಜೀವಿಯೂ ಪ್ರಕೃತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಜೀವಿಸುತ್ತವೆ.
ಪರಿಸರ (Environment) - ಎಲ್ಲಾ ಜೀವಿಗಳು, ಜೈವಿಕ ವಸ್ತುಗಳು ವಾಸಿಸುವ ಸುತ್ತಲಿನ ಸನ್ನಿವೇಶವನ್ನು ಪರಿಸರ ಎನ್ನುವರು. ಜೀವವಾಸಿಗಳ ಅಸ್ತಿತ್ವ ಹಾಗೂ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಯನ್ನು ಪರಿಸರ ನಿರ್ಮಾಣ ಮಾಡುತ್ತದೆ. ಪರಿಸರದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಪ್ರಾಕೃತಿಕ ಅಥವಾ ಭೌಗೋಳಿಕ ಪರಿಸರ ಮತ್ತು ಸಾಂಸ್ಕೃತಿಕ ಅಥವಾ ಮಾನವ ನಿರ್ಮಿತ ಪರಿಸರ,
ಪರಿಸರ ಮಾಲಿನ್ಯ: ನಮ್ಮ ಸುತ್ತಮುತ್ತಲಿನಲ್ಲಾಗುವ ಅನಪೇಕ್ಷಣೆಯ ಬದಲಾವಣೆಯೇ 'ಪರಿಸರಮಾಲಿನ್ಯ' ಇದು ಮಾನವನೂ ಸೇರಿದಂತೆ ಜೀವಿಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನುಂಟು ಮಾಡುವುದು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜೀವಮಂಡಲದ ಘಟಕಗಳನ್ನು ಬದಲಾಯಿಸುತ್ತದೆ.
ಇಂದು ಪರಿಸರ ಮಾಲಿನ್ಯವು ಜೀವಪರಿಸರವು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲೊಂದಾಗಿದೆ. ಇದಕ್ಕೆ ಕಾರಣವಾದ ಅಂಶಗಳೆಂದರೆ ಅಧಿಕ ಜನಸಂಖ್ಯೆ, ಕೈಗಾರಿಕೀಕರಣ, ನಗರೀಕರಣ, ಸಂಪನ್ಮೂಲಗಳ ದುರ್ಭಳಕೆ, ಅತಿಯಾಗಿ ವಾಹನಗಳನ್ನು ಬಳಸುವುದು ಇತ್ಯಾದಿ, ಇವುಗಳು ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮಾನವ ಜೀವಿಗಳ ಜೀವನಕ್ರಮದಲ್ಲಾಗುವ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತವೆ.
-ಮಾಲಿನ್ಯವನ್ನುಂಟು ಮಾಡುವ ವಸ್ತುಗಳಿಗೆ ಮಾಲಿನ್ಯಕಾರಕಗಳೆನ್ನುವರು. ಅವುಗಳಲ್ಲಿ ಸ್ವಾಭಾವಿಕ ಮತ್ತು ಮಾನವ ನಿರ್ಮಿತ ಮಾಲಿನ್ಯಕಾರಕಗಳೆಂದು ಎರಡು ವಿಧಗಳಿವೆ, ಸ್ವಾಭಾವಿಕ ಮಾಲಿನ್ಯಕಾರಕಗಳಿಗಿಂತ ಮಾನವ ನಿರ್ಮಿತ ಮಾಲಿನ್ಯಕಾರಕಗಳು ಹೆಚ್ಚು ಅಪಾಯಕಾರಿ ಹಾಗೂ ಹಾನಿಕಾರಕಗಳಾಗಿವೆ. ಹೊಗೆ, ವಿಷಾನಿಲ, ದೂಳು, ಚರಂಡಿನೀರು, ಕಸಕಡ್ಡಿಗಳು ಇತ್ಯಾದಿಗಳು ಗೋಚರ ಮಾಲಿನ್ಯಕಾರಕಗಳಾಗಿವೆ. ಅಗೋಚರ ಮಾಲಿನ್ಯಕಾರಕಗಳಾವುವೆಂದರೆ ಆಹಾರ, ಮಣ್ಣು ಮತ್ತು ನೀರಿನಲ್ಲಿ ಮಿಶ್ರಣವಾದ ವಿಷಯುಕ್ತ ರಾಸಾಯನಿಕ ವಸ್ತುಗಳು ಮತ್ತು ಬ್ಯಾಕ್ಟಿರಿಯಾಗಳು,
ಮಾಲಿನ್ಯದ ವಿಧಗಳು): ಪರಿಸರ ಮಾಲಿನ್ಯದಲ್ಲಿ ಹಲವಾರು ವಿಧಗಳಿದ್ದು ಅವುಗಳನ್ನು ಮಾಲಿನ್ಯಕಾರಕಗಳು ಮತ್ತು ಮಾಲಿನ್ಯದ ಸ್ವರೂಪದ ಆಧಾರದ ಮೇಲೆ ವಿಂಗಡಿಸಲಾಗಿದೆ. ಅವುಗಳೆಂದರೆ- ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ ಮತ್ತು ಶಬ್ದಮಾಲಿನ್ಯ
1. ವಾಯುಮಾಲಿನ್ಯ : ವಾಯುಮಾಲಿನ್ಯವನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O) ಹೀಗೆ ಅರ್ಥೈಸಿದ “ಮಾನವನ ವಿವಿಧ ಚಟುವಟಿಕೆಗಳಿಂದ ಸಾಂದ್ರೀಕರಣಗೊಂಡ ಪದಾರ್ಥಗಳು ವಾಯುವಿನಲ್ಲಿ ಸೇರಿ ಮಾನವನ ಆರೋಗ್ಯ, ವನಸ್ಪತಿ ಮತ್ತು ಆಸ್ತಿ ಪಾಸ್ತಿಗಳ ಮೇಲೆ ಪರಿಣಾಮ ಬೀರಿ ಹಾನಿಯುಂಟುಮಾಡುವುದೇ ವಾಯುಮಾಲಿನ್ಯವಾಗಿದೆ". ವಾಯುಮಾಲಿನ್ಯಕಾರಕದ ಪ್ರಮುಖ ಮೂಲಗಳೆಂದರೆ ಜ್ವಾಲಾಮುಖಿಗಳು, ಕಾಡಿಚ್ಚು, ಬಾಹ್ಯಾಕಾಶ ದೂಳು ಇತ್ಯಾದಿ, ಬಿ) ಮಾನವನಿರ್ಮಿತ ಮೂಲಗಳು : ಪ್ರಾಕೃತಿಕ ಮೂಲಗಳು: ಕೈಗಾರಿಕೆಗಳಿಂದ, ಗೃಹಬಳಕೆಯಿಂದ, ವಾಹನಗಳಿಂದ, ಗಣಿಗಾರಿಕೆ, ಅಣುಶಕ್ತಿ ಘಟಕಗಳಿಂದ, ಅಣುಸ್ಫೋಟನ ಇತ್ಯಾದಿಗಳಿಂದ ಬರುವ ಅನಿಲಗಳು,
ಬಹುಮುಖ್ಯವಾದ ವಾಯುಮಾಲಿನ್ಯಕಾರಕಗಳೆಂದರೆ: ಇಂಗಾಲದ
ಮಾನಾಕ್ಸೆಡ್, ಗಂಧಕದ ಡೈಆಕ್ಸೆಡ್, ಸಾರಜನಕದ ಆಕ್ಸೆಡ್ಗಳು, ಕ್ಲೋರೋಪ್ಲೋರೋ ಕಾರ್ಬನ್ಗಳು (CFC), ಹೈಡೋಕಾರ್ಬನ್ಗಳು ಇದರಿಂದಾಗುವ ಪ್ರಮುಖ ಪರಿಣಾಮಗಳಾವುವೆಂದರೆ, ಹವಾಮಾನ ಮತ್ತು ವಾಯುಗುಣ ಪರಿಸ್ಥಿತಿ ವ್ಯತ್ಯಾಸ, ಓರೋನ್, ಕ್ಷೀಣತೆ, ಹಸಿರುಮನೆ ಪರಿಣಾಮ, ಜಾಗತಿಕ ತಾಪಮಾನ ಮಾನವನ ಆರೋಗ್ಯದ ಮೇಲೆ ಪರಿಣಾಮ, ಉಸಿರಾಟ ವ್ಯವಸ್ಥೆಯಲ್ಲಿ ತೊಂದರೆ, ಸಸ್ಯಗಳು ಹಾಗೂ ಪ್ರಾಣಿವರ್ಗಗಳ ಜೀವನದ ಮೇಲೆ ದುಷ್ಪರಿಣಾಮ ಮೊದಲಾದವುಗಳು.
ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳೆಂದರೆ ಮಾಲಿನ್ಯಕಾರಕ ಅನಿಲಗಳನ್ನು ನಿಯಂತ್ರಿಸುವುದು, ವಾಹನಗಳಿಂದ ಬರುವ ಹೊಗೆಯನ್ನು ನಿಯಂತ್ರಿಸುವುದು, ಹೆಚ್ಚು ಮರಗಳನ್ನು ಬೆಳೆಸುವುದು, ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಬಳಸುವುದು, ಜನರಲ್ಲಿ ಅರಿವುಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಕಾನೂನಿನಿಂದ ನಿಯಂತ್ರಿಸುವುದು, ಸಾಕ್ಷರತೆ ಮತ್ತು ಶಿಕ್ಷಣ,
2. ಜಲಮಾಲಿನ್ಯ : ಜಲಮಾಲಿನ್ಯವೆಂದರೆ ಮಾನವ ಮತ್ತು ಜಲಚರಗಳ ಜೀವನೋಪಾಯದ ಮೇಲೆ ಅನರ್ಥ ಪರಿಣಾಮವನ್ನುಂಟು ಮಾಡುವಷ್ಟು ನೀರಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳ ಬದಲಾವಣೆ. ಜಲಮಾಲಿನ್ಯದ ಪ್ರಮುಖ ಮೂಲಗಳಾವುವೆಂದರೆ, ನೈಸರ್ಗಿಕ ಮೂಲಗಳಲ್ಲಿ ಮಣ್ಣಿನ ಸವೆತ,
ಭೂಕುಸಿತಗಳು: ಜ್ವಾಲಾಮುಖಿ ಸ್ಫೋಟನೆ, ಸಸ್ಯಗಳು ಮತ್ತು ಪ್ರಾಣಿಗಳು ಕ್ಷಯಿಸುವ ಮತ್ತು ಕೊಳೆಸುವ ಪ್ರಕ್ರಿಯೆಗಳು ಸೇರುತ್ತವೆ. ಮಾನವ ನಿರ್ಮಿತ ಮೂಲಗಳಲ್ಲಿ ಕೈಗಾರಿಕೆಗಳ ತ್ಯಾಜ್ಯವಸ್ತು, ನಗರಗಳ ತ್ಯಾಜ್ಯವಸ್ತು, ಹತಾಜ್ಯವಸ್ತು, ಕೃಷಿತ್ಯಾಜ್ಯವಸ್ತುಗಳು, ತೈಲಸೋರುವಿಕೆ, ಅಣುತ್ಯಾಜ್ಯ, ತೈಲಬಾವಿಗಳನ್ನು ಸಾಗರವಲಯದಲ್ಲಿ ಕೊರೆಯುವುದು, ಶಾಖ ವಿದ್ಯುತ್ ಕೇಂದ್ರಗಳ ತ್ಯಾಜ್ಯವಸ್ತುಗಳು ಇತ್ಯಾದಿ ಜಲಮಾಲಿನ್ಯವನ್ನುಂಟು ಮಾಡುತ್ತವೆ.
ಜಲಮಾಲಿನ್ಯದಲ್ಲಿ ಅನೇಕ ವಿಧಗಳಿವೆ. ಅವುಗಳೆಂದರೆ - ಸಮುದ್ರ ಮತ್ತು ಸಾಗರ ಮಾಲಿನ್ಯ ಅಂತರ್ಜಲ ಮಾಲಿನ್ಯ, ನದಿ ನೀರಿನ ಮಾಲಿನ್ಯ, ಸರೋವರ ನೀರಿನ ಮಾಲಿನ್ಯ ಎಂದು ಗುರುತಿಸಬಹುದಾಗಿದೆ.
ಜಲಮಾಲಿನ್ಯದಿಂದಾಗುವ ಪರಿಣಾಮಗಳೆಂದರೆ - ಮಲಿನ ನೀರಿನಿಂದ ಹರಡುವ ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳಾದ ಕಾಲರಾ, ಟೈಫಾಯಿಡ್, ಕ್ಷಯ, ಕಾಮಾಲೆ, ಆಮಶಂಕೆ, ಅತಿಸಾರ ಇತ್ಯಾದಿ ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಮಲಿನಗೊಂಡ ನೀರನ್ನು ನೀರಾವರಿಗೆ ಬಳಸಿದರೆ ಬೆಳೆಗಳಿಗೆ ಹಾನಿಯಾಗುತ್ತದೆ.
ಜಲಮಾಲಿನ್ಯ ನಿಯಂತ್ರಣ ಕ್ರಮಗಳೆಂದರೆ- ಕೈಗಾರಿಕಾ ತ್ಯಾಜ್ಯವಸ್ತುಗಳನ್ನು ಸಂಸ್ಕರಿಸುವುದು, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವುದು, ಚರಂಡಿ ನೀರನ್ನು ಸಂಸ್ಕರಿಸುವುದು, ಕಸದ ರಾಶಿಗಳನ್ನು ಜಲರಾಶಿಗಳಲ್ಲಿ ಹಾಕುವುದನ್ನು ಜನರು ನಿಲ್ಲಿಸಬೇಕು.
3. ಮಣ್ಣಿನ ಮಾಲಿನ್ಯ : ಸ್ವಾಭಾವಿಕ ಅಥವಾ ಮಾನವ ನಿರ್ಮಿತ ಮೂಲಗಳಿಂದ ಮಣ್ಣಿನ ಫಲವತ್ತತೆ, ಗುಣಮಟ್ಟ ಹಾಳಾಗುವುದನ್ನು ಮಣ್ಣಿನ ಮಾಲಿನ್ಯವೆನ್ನುವರು. ಮಣ್ಣಿನ ಸವೆತದ ತೀವ್ರತೆ ಸಸ್ಯಪೋಷಕ ಆಹಾರದ ಕುಸಿತ, ಮಣ್ಣಿನಲ್ಲಿರುವ ಅತಿಸೂಕ್ಷ್ಮ ಜೀವಾಣುಗಳು ಕಡಿಮೆಯಾಗುವುದು ಇತ್ಯಾದಿ. ಮಣ್ಣಿನ ಮಾಲಿನ್ಯದ ಮೂಲಗಳಾವುವೆಂದರೆ - ಕೈಗಾರಿಕೆ ಮತ್ತು ಗಣಿಗಾರಿಕೆ ತ್ಯಾಜ್ಯವಸ್ತುಗಳು, ಗೃಹಬಳಕೆ ಮತ್ತು ನಗರ ತ್ಯಾಜ್ಯವಸ್ತುಗಳು, ಕೃಷಿ ತ್ಯಾಜ್ಯವಸ್ತುಗಳು, ಅಣುತ್ಯಾಜ್ಯವಸ್ತುಗಳು,
ಮಣ್ಣಿನ ಮಾಲಿನ್ಯದ ಪರಿಣಾಮಗಳು : ಮಣ್ಣಿನ ಫಲವತ್ತತೆ ಕ್ಷೀಣಿಸುವುದು, ಫಲವತ್ತಾದ ಭೂಮಿ ಪಾಳುಭೂಮಿಯಾಗುತ್ತದೆ, ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ.
ಮಣ್ಣಿನ ಮಾಲಿನ್ಯದ ನಿಯಂತ್ರಣ ಕ್ರಮಗಳು : ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳು ಮುಂತಾದವುಗಳನ್ನು ವಿವೇಕತೆಯಿಂದ ಬಳಸುವುದು ಮತ್ತು ನಿಯಂತ್ರಿಸುವುದು, ಕೈಗಾರಿಕೆ ಮತ್ತು ನಗರ ತ್ಯಾಜ್ಯವಸ್ತುಗಳನ್ನು ಸಂಸ್ಕರಿಸಿ ಆನಂತರ ವ್ಯವಸಾಯಕ್ಕೆ ಬಳಸುವುದು, ಸಮರ್ಪಕವಾಗಿ ಭೂಬಳಕೆ ಹಾಗೂ ಬೆಳೆಗಳ ಕ್ರಮವನ್ನು ಅನುಸರಿಸುವುದು, ಮಣ್ಣಿನ ಸವೆತ ನಿಯಂತ್ರಿಸುವುದು, ಗಿಡಮರಗಳನ್ನು ಬೆಳೆಸುವುದು, ಮಣ್ಣಿನ ಸರಿಯಾದ ಬಳಕೆ ಮತ್ತು ಮಣ್ಣಿನ ನಿರ್ವಹಣೆಯ ಬಗ್ಗೆ ಅರಿವುಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
4. ಶಬ್ದಮಾಲಿನ್ಯ : ಪ್ರತಿಕೂಲಕರ ಪರಿಣಾಮ ಬೀರುವ ಅನಗತ್ಯವಾದ ಶಬ್ದವು ವಾಯುಮಂಡಲದಲ್ಲಿ ಹರಡಿ ಆರೋಗ್ಯಕ್ಕೆ ಹಾನಿಯುಂಟುಮಾಡುವುದನ್ನು ಶಬ್ದಮಾಲಿನ್ಯ ಎನ್ನುವರು.
ಶಬ್ದಮಾಲಿನ್ಯದ ಮೂಲಗಳಾವುವೆಂದರೆ : ನೈಸರ್ಗಿಕ ಮೂಲಗಳು- ಗುಡುಗು, ಸಿಡಿಲು, ಮಿಂಚು, ಅತ್ಯಧಿಕಮಳೆ, ಆಲಿಕಲ್ಲು ಮಳೆ, ಜಲಪಾತಗಳು, ಸಮುದ್ರದ ಅಲೆಗಳು, ಮಾನವ ನಿರ್ಮಿತ ಮೂಲಗಳು -
ಕೈಗಾರಿಕೆಗಳ ಶಬ್ದ, ವಾಹನಗಳ ಶಬ್ದ, ವಿಮಾನಗಳ ಶಬ್ದ, ಗಣಿಗಾರಿಕೆ, ನಗರಪ್ರದೇಶಗಳ ಶಬ್ದ, ಇತ್ಯಾದಿ, ಶಬ್ದಮಾಲಿನ್ಯದ ಪರಿಣಾಮಗಳೆಂದರೆ : ತಾತ್ಕಾಲಿಕ ಅಥವಾ ಶಾಶ್ವತವಾಗಿ ಕಿವಿ ಕೇಳಿಸದಿರುವುದು. ತಲೆನೋವು, ಆಯಾಸ, ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆ, ದೈಹಿಕ ಬದಲಾವಣೆ.
ನಗರವಲಯದಿಂದ ದೂರ ನಿರ್ಮಿಸುವುದು, ಕೈಗಾರಿಕಾ ಕಾರ್ಮಿಕರುಗಳಿಗೆ ಶಬ್ದ ನಿಯಂತ್ರಕಗಳನ್ನು ಒದಗಿಸುವುದು, ಶಬ್ದವುಂಟುಮಾಡುವ ವಾಹನಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದು.
ಜಾಗತಿಕ ತಾಪಮಾನ (Global Warming) : ಭೂಮಿಯ ಉಷ್ಣಾಂಶವು ದಿನಗಳು ಕಳೆದಂತೆ ನಿಧಾನವಾಗಿ ಹೆಚ್ಚುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ವಾಯುಮಂಡಲದ ಉಷ್ಣಾಂಶವು ಹೆಚ್ಚಾಗುತ್ತಿದೆ. ಇದನ್ನೇ 'ಜಾಗತಿಕ ತಾಪಮಾನ' ಎಂದು ಕರೆಯುವರು. ಇದಕ್ಕೆ ಹಸಿರು ಮನೆಯ ಪರಿಣಾಮ ಕಾರಣವಾಗಿದ್ದು ಇದರಿಂದ ವಾಯುಗುಣದ ವಲಯಗಳು ಬದಲಾವಣೆ ಹೊಂದುತ್ತಿವೆ, ಹಿಮನದಿಗಳು ಕರುಗುತ್ತಿವೆ ಮತ್ತು ಸಮುದ್ರದ ನೀರಿನ ಮಟ್ಟವು ಹೆಚ್ಚುತ್ತಿದೆ. ಉದಾಹರಣೆಗೆ ಹಿಮಾಲಯ ಆರ್ಕ್ಟಿಕ್್ರ ಹಾಗೂ ಅಂಟಾರ್ಕ್ಟಿಕಗಳಲ್ಲಿ ಈಗಾಗಲೇ ಹಿಮರಾಶಿಯು ಕರುಗುವುದು ಹೆಚ್ಚಾಗಿದೆ.
ಹಸಿರು ಮನೆಯ ಪರಿಣಾಮ (Green House Effect): ಭೂಮಿಯು ಸೂರ್ಯನಿಂದ ಶಕ್ತಿಯನ್ನು ವಿಕಿರಣದ ರೂಪದಲ್ಲಿ ಪಡೆಯುವುದು. ಇದೇ ರೀತಿಯಲ್ಲಿ ಭೂಮಿಯಿಂದಲೂ ಉಷ್ಣಾಂಶವು ಮರುವಿಕರಣ ರೂಪದಲ್ಲಿ ಹೊರಬೀಳುವುದು, ಈ ಕ್ರಿಯೆಗಳಿಂದಾಗಿಯೇ ಭೂಮಿಯು ಪಡೆಯುವ ಹಾಗೂ ಬಿಡುಗಡೆಮಾಡುವ ಶಕ್ತಿಯ ನಡುವೆ ಸಮತೋಲನವಿರುವುದು. ಇತ್ತೀಚಿಗೆ ಜೀವಾವಶೇಷ ಇಂಧನಗಳ ಬಳಕೆಯಿಂದ ಹಸಿರುಮನೆ ಅನಿಲಗಳ ಬಿಡುಗಡೆಯೂ ಸಹ ನಿರಂತರವಾಗಿ ಹೆಚ್ಚುತ್ತಿದೆ. (ಇಂಗಾಲದ ಡೈ ಆಕ್ಸೆಡ್ ಮತ್ತು ಇತರೆ ಹಸಿರು ಮನೆ ಅನಿಲಗಳು ಭೂಮಿಯಿಂದ ಬಿಡುಗಡೆಯಾಗುವ ಉಷ್ಣಾಂಶವನ್ನು ಹೀರಿ ಸಂಗ್ರಹಿಸುವುದರಿಂದ ವಾಯುಮಂಡಲ ಉಷ್ಣಾಂಶವು ಹೆಚ್ಚುವುದು. ಇದನ್ನೇ 'ಹಸಿರು ಮನೆಯ ಪರಿಣಾಮ' ಎಂದು ಕರೆಯುವರು.
ಓಜೋನ್ ಪದರ ಕ್ಷೀಣತ: (Ozone Depletion): ವಾಯುಮಂಡಲದ ಸಮೋಷ್ಣ ವಲಯದಲ್ಲಿ ತಳುವಾದ ಓಜೋನ್ ಅನಿಲದ ಪದರವಿರುವುದು. ಇದು ಸೂರ್ಯನಿಂದ ಪ್ರಸರಿಸುವ ಅತ್ಯಂತ ಅಪಾಯಕಾರಿಯಾದ ಅಲ್ಪಾವೈಲೆಟ್ (UV) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಬಗೆಯ ಜೀವರಾಶಿಗಳನ್ನು ರಕ್ಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಏರಂಡಿಷನರ್, ರೆಫ್ರಿಜಿರೇಟರ್, ಸ್ಟೇಯರ್, ಸುಗಂಧದ್ರವ್ಯಗಳು ಮೊದಲಾದುವುಗಳ ಮಿತಿಮೀರಿದ ಬಳಕೆಯಿಂದ ಕ್ಲೋರೋ ಫ್ಲೋರೋ ಕಾರ್ಬನ್' (CFC) ಗಳು ಹೆಚ್ಚಾಗಿ ಬಿಡುಗಡೆಗೊಂಡು ವಾಯುಮಂಡಲದ ಓಜೋನ್ ಪದರವನ್ನು ನಾಶಪಡಿಸುತ್ತಿವೆ. ಈಗಾಗಲೇ ಅಂಟಾರ್ಕ್ಟಿಕಾದ ವಾಯುಮಂಡಲದಲ್ಲಿ ಓಜೋನ್ ಪದರವು ನಾಶವಾಗಿರುವುದನ್ನು ಕಂಡುಹಿಡಿಯಲಾಗಿದೆ. ಈ ರೀತಿ ಓಜೋನ್ ತೆಳುವಾಗುವಿಕೆಯು ಓಜೋನ್ ರಂಧ್ರ ಉಂಟುಮಾಡುತ್ತಿದೆ. ಇದನ್ನು ತಡೆಗಟ್ಟುವುದು ಇಂದಿನ ಮತ್ತು ಮುಂದಿನ ಜನಾಂಗಗಳು ಬದುಕಲು ಅತ್ಯಾವಶ್ಯಕವಾಗಿದೆ.
ಆಮ್ಲ ಮಳೆ: (Acid Rain): ಮಳೆಯ ಹನಿಗಳು ಮಾಲಿನಗೊಂಡ ವಾಯುಮಂಡಲ ಮೂಲಕ ಬೀಳುವಾಗ ಅದರಲ್ಲಿ ಸಲ್ಲೂರಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ರೆಡ ಮುಂತಾದವು ವಿಲೀನಗೊಂಡು ಬೀಳುವ ಮಳೆಯನ್ನು ಆಮ್ಲ ಮಳೆ ಎನ್ನುವರು. ಈ ರೀತಿಯ ಮಳೆ ಅತ್ಯಂತ ವಿಷಕಾರಿಯಾಗಿದ್ದು, ಜಲಚರಗಳ ನಾಶಕ್ಕೆ ಕಾರಣವಾಗುವುದು. ಅಲ್ಲದೆ ಅವು ಮಳೆಯಿಂದ ಆರಣ್ಯ, ಬೆಳೆ, ಕಟ್ಟಡ, ಸ್ಮಾರಕ ಮೊದಲಾದವು ಹಾಳಾಗುತ್ತವೆ.
ಆಮ್ಲ ಮಳೆಯನ್ನು ಲೇಕ್ಕಿಲ್ಲರ್" ಎಂದು ಕರೆಯುತ್ತಾರೆ. ಪೋಲೆಂಡ್, ಜೆಕ್ಗಣರಾಜ್ಯ ಮತ್ತು ಆಗ್ನೆಯ ಜರ್ಮನಿಯ ಭಾಗಗಳು ಪ್ರಪಂಚದಲ್ಲೇ ಅತಿ ಹೆಚ್ಚು ಆಮ್ಲ ಮಳೆಯ ಪರಿಣಾಮಕ್ಕೆ ಒಳಪಟ್ಟಿರುವ ಪ್ರದೇಶಗಳಾಗಿರುವುದರಿಂದ ಇವುಗಳನ್ನು “ಕಪ್ಪು ತ್ರಿಕೋನ" ಎನ್ನುವರು.
ಜೀವ ವೈವಿಧ್ಯತೆ: ಒಂದು ಭೂ ಭಾಗದಲ್ಲಿ ಕಂಡುಬರುವ ಎಲ್ಲಾ ಬಗೆಯ ಸಸ್ಯಗಳು ಹಾಗೂ ಪ್ರಾಣಿ ಪ್ರಭೇದಗಳನ್ನು ಅಲ್ಲಿಯ 'ಜೀವ ವೈವಿಧ್ಯತೆ' ಯೆಂದು ಕರೆಯುವರು. ಜೀವಿ ಪ್ರಭೇದಗಳ ಸಂಖ್ಯೆಯು
ಶಬ್ದಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು : ವಾಸಸ್ಥಳದಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು, ಕಾರ್ಖಾನೆಗಳಲ್ಲಿ ಶಬ್ದ ನಿರೋಧಕ ಗೋಡೆಗಳನ್ನು ನಿರ್ಮಿಸುವುದು. ಅನಗತ್ಯವಾಗಿ ಸೈರನ್, ಹಾರನ್ ಮತ್ತು ಶಬ್ದಮಾಡುವ ಉಪಕರಣಗಳನ್ನು ಬಳಸುವುದನ್ನು ನಿಲ್ಲಿಸುವುದು, ವಿಮಾನ ನಿಲ್ದಾಣಗಳನ್ನುಜೀವ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದು, ಜೀವವೈವಿಧ್ಯತೆ ಅತ್ಯಂತ ಪ್ರಮುಖವಾದುದು. ಏಕೆಂದರೆ ಇದು ಪರಿಸರದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮಾತ್ರವಲ್ಲದೆ ಮಾನವನ ಉಳಿವಿಗೂ ಸಹ ಅಗತ್ಯವಾಗಿದೆ. ಅತ್ಯಂತ ಅಪರೂಪವಾಗಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ಕಾಪಾಡಲು ಜೀವ ವೈವಿಧ್ಯತೆಯ ಸಂರಕ್ಷಣೆ ಅಗತ್ಯ ಈ ಜೀವಿಗೆ ಅಗತ್ಯವಾದ ಒಳ್ಳೆಯ ಪರಿಸರದ ಹಿನ್ನೆಲೆಯನ್ನು ದೊರಕಿಸಿಕೊಡುವುದು
ಅವುಗಳ ಸಂರಕ್ಷಣೆಯ ಮುಖ್ಯ ವಿಧಾನವಾಗಿದೆ. ) ಭೂಮಿಯು ಸೌರವೂಹದಲ್ಲಿನ ಜೀವಿಗಳನ್ನೊಳಗೊಂಡಿರುವ ಏಕೈಕ ಗ್ರಹ, ಮಾನವನ ವಿವಿಧ ಚಟುವಟಿಕೆಗಳಿಂದ ಭೂಮಿಯ ಮೇಲೆ ಅನೇಕ ರೀತಿಯ ಬದಲಾವಣೆಗಳು, ತೊಂದರೆಗಳು, ಹಾನಿಕಾರಕ ಅಂಶಗಳು ಕಂಡುಬರುತ್ತಿದ್ದು ಮುಂಬರುವ ವರ್ಷಗಳಲ್ಲಿ ನಮ್ಮ ಭೂಮಿಯ ಮೇಲಿನ ಜೀವಿಗಳ ಗುಣಮಟ್ಟ ಹಾಳಾಗುತ್ತದೆ.
ನಮ್ಮ ಭೂಮಿಯನ್ನು 'ರಕ್ಷಿಸಿ' ಹಾಗೂ 'ಮಾತೃಗ್ರಹ'ವನ್ನು ಉಳಿಸಿಕೊಳ್ಳಲು ಜನರಿಗೆ ಶಿಕ್ಷಣ ನೀಡುವುದು, ಪರಿಸರದ ಬಗ್ಗೆ ಅರಿವುನ್ನುಂಟುಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದು, ಮಾಲಿನ್ಯ ನಿಯಂತ್ರಿಸುವುದರ ಬಗ್ಗೆ ಅರಿವು ನೀಡುವ ಶಿಕ್ಷಣ, ಉಪನ್ಯಾಸ, ಆಶುಭಾಷಣ ಸ್ಪರ್ಧೆ, ಚಲನಚಿತ್ರಗಳ ಸಮ್ಮೇಳನಗಳನ್ನು ಆಗಾಗ್ಗೆ ನಡೆಸುವುದರ ಮೂಲಕ ಜಾಗೃತಿ ಮೂಡಿಸಿ ನಮ್ಮ ಮಾತೃಭೂಮಿಯನ್ನು ಸಂರಕ್ಷಿಸುವುದು ಅಗತ್ಯವಾಗಿದೆ.
Post a Comment